----------ನನ್ನೊಬ್ಬ ಗೆಳತಿಯ ಬ್ಲಾಗಲ್ಲಿ ಸಿಕ್ಕ ತರಳೆ(ಹುಡುಗಿ)ಯ ತಿಟ್ಟ(ಚಿತ್ರ)ವನ್ನು ನೋಡಿದ ನನ್ನ ಕವಿ ಪಲುಕು(ಕಲ್ಪನೆ) ಕಟ್ಟಿದ ಕವಿತೆ ಇದು---------------

ಈ ತಿಟ್ಟ ನೋಡುಲು ಅನುವು ಮಾಡಿದ ಹೇಮಶ್ರೀಗೆ ನನ್ನಿ.
http://daisyridgediary.blogspot.com/2008/08/total-solar-eclipse-on-aug-1-2008.html
****************
ಬಾನ ನೇಸರನು
ನಿನ್ನ ಒಡಲನ್ನು ಇಣುಕುತಿಹನು
ಕದ್ದು ತಿನ್ನ ಬಾರದು ಪೆದ್ದು
ತಮ್ಮನ ತಿಂಡಿಯಲ್ಲವನು
ತುಂಡು ಅಂಗಿಯನುಟ್ಟು
ಮೊಂಡು ಕೂದಲನು ಬಿಟ್ಟು
ಹಲ್ಲು ಗಿಂಜುತ ಹಗಲೆಲ್ಲ
ತರಲೆ ತರಳೆ ನಿನಾಗಿಹೆಯಲ್ಲ
ತಲೆಯ ಎತ್ತೊಮ್ಮೆ ನೋಡು
ಕಣ್ಣು ಪಿಳಿಕಿಸಿ ಕೇಳು
ಶಾಲೆಗೆ ಇಂದು ನೀನು
ಹೋಗಲಿಲ್ಲ ಯಾಕೆ ಹೇಳು
ಮರಳ ರಾಸಿಯಳಿ ಉರುಳಿ
ಗುಬ್ಬಚ್ಚಿ ಗೂಡನು ಮಾಡಿ
ಗಾಳಿಪಟವನು ಹಾರಿಸಿ ಏರಿಸಿ
ಹಸಿದಿರುವೆ ಬಾ ಹಣ್ಣು ಹಂಪಲವನುಣ್ಣು
ಹೇಳಿ ಕಳಿಸು ನೇಸರನಿಗೆ
ಮುಂದೆಂದೂ ಹೀಗೆ ಮಾಡೆನೆಂದು
ನಾಳೆ ನಸುಕಿನಲಿ ಬೇಗ ಎದ್ದು
ನಿನಗೆ ಕಯ್ಮುಗಿಯುವೆನೆಂದು
ಮೂಡಣದಿ ನೀ ಬರುವ ಹೊತ್ತಲ್ಲಿ
ಚಿಲಿಪಿಯನ್ನು ಹಾಡುವ ಹಕ್ಕಿಗೆ
ಕೀಟಲೆಯನು ಕೊಡದೇ ಚಂದದಿ
ಕೂತು ಇಂಪನು ಆಲಿಸುವೆನೆಂದು
*********
ಜಾಣೆ ನಾನಾಗುವೆನು ಎಲ್ಲರಲಿ
ಹಂಚಿ ತಿನ್ನುವೆನು ಸಂತಸದಿ
ತಪ್ಪಿಸೆನು ಶಾಲೆಯನು ಇನ್ನೆಂದು
ತರಲೆ ತರಳೆ ನಾನಲ್ಲ ತೋರಿಸುವೆನಿಂದು
**ಕುಕೂಊ.....
ಪುಣೆ